ಕವನಗಳು ಕಥೆ ಲೇಖನಗಳು ಅಂತರಾಳದ ಮಾತುಗಳು

Monday 13 October 2014

ನಾನು ನನ್ನ ಕಣ್ಣಾರೆ ನೋಡಿದ್ದು...ಕೇಳಿದ್ದು ಇದು ನನ್ನ ಅನುಭವದ ಕಥನ...A Libya Experience - Part II

ತ್ರಿಪೋಲಿ, ಲಿಬಿಯ

ನನ್ನ ಪಾಲಿಗೆ ಎಂದಿಗೂ ಮರೆಯಲಾರದ ನೆನಪು. ಸುಂದರ ದೇಶ. ಮೆಡಟರೇನಿಯನ್ ವಾತಾವರಣ. ಇಟಲಿಯ ಪಡಿಯಚ್ಚು. ದೇಶ ಸೃಷ್ಠಿಯ ಅತ್ಯುತ್ತಮ ಕೊಡುಗೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಪ್ರಕ್ಷುಬ್ಧ ಮನಸ್ಸೂ ಮಂದಸ್ಮಿತವಾಗಬೇಕು.



 ಜನಸಾಮಾನ್ಯರು

ಸುಂದರ ಕಾಯದ ಜನರು. ಬಿಳಿ- ಕೆಂಪು ರಂಗಿನ, ಎತ್ತರ ಜನರು. ಪ್ಯಾಶನ್ ಪ್ರಿಯರು. ಸಾಮಾನ್ಯ ಜನರಿಗೂ ಎಲ್ಲಾ ಸೌಕರ್ಯಗಳು ಲಭ್ಯವಿದ್ದ ಕಾಲ. ಕಾರು, ಮನೆ, ಹೊಟ್ಟೆಗೆ ಬಟ್ಟೆಗೆ, ಶೋಪಿಂಗ್ ಯಾವುದಕ್ಕೂ ಕೊರತೆಯಿರಲಿಲ್ಲ.
ಅಸಂತೃಪ್ತರಂತೆ ಕಾಣಿಸುತ್ತಿರಲಿಲ್ಲ. ಅಲ್ಲಿನ ನಾಗರಿಕರಿಗೆ ಭತ್ಯೆ ಸಿಗುತ್ತಿತ್ತು. ರೋಟಿ, ಬ್ರೆಡ್, ಕುಬ್ಜಾಗಳನ್ನು ಖರೀದಿಸಲು ಸರಕಾರದಿಂದ ಕೂಪನ್ ಲಭ್ಯವಿತ್ತು. ನಾಗರಿಕರಿಗೆ ಪೆಟ್ರೋಲನ ಲಾಭಾಂಶದ ಹಣ ಬ್ಯಾಂಕನಲ್ಲಿ ಅವರವರ ಖಾತೆಗೆ ಜಮಾವಾಗುತ್ತಿತ್ತು. ಮನೆಯಿಲ್ಲದವರಿಗೆ ಸರಕಾರ ವಸತಿ ವ್ಯವಸ್ಥೆ ಮಾಡುತ್ತಿತ್ತು.
ವಿದ್ಯಾರ್ಥಿಗಳಿಗೆ ಉಚಿತ ವಿಧ್ಯಾಭ್ಯಾಸ, along with that, for their higher studies, Govt was providing stipend too.



ಮನೆಯ ಮಾಲಿಕ ಮತ್ತು ಅಲ್ಲಿಯ ಕೆಲವು ನಾಗರಿಕರ ಮಾತು-

ನಮ್ಮ ಮನೆಯ ಮಾಲಿಕ  3 ಲಕ್ಷ ದಿನ್ನಾರಿನ ಬಂಗಲೆ, (ಅಂದರೆ ನಮಲ್ಲಿಯ 10 ಕೋಟಿ) ಜೊತೆಗೆ ಎರಡು ಅಪಾರ್ಟಮೆಂಟಿನ ಒಡೆಯ. .ಇವನು ಸರಕಾರದ ವಿರುದ್ಧದ ಜನಜಾತಿಯವನು. ಆದರೂ ಸಂತೋಷದಿಂದ ಇದ್ದವ. 90% ನಾಗರಿಕರು ಉತ್ತಮ ಸ್ಥಿಯಲ್ಲಿ ಇದ್ದಾರೆಂದು ಹೇಳಿದ್ದ.
ಯುದ್ಧದ ಅವಶ್ಯಕತೆ ಇರಲಿಲ್ಲ. ಸಮಾಜದಲ್ಲಿ ಕೆಲವು ಸುಧಾರಣೆಯ ಅಗತ್ಯವಿದೆ, ಹೀಗಾಗಿ ಕೆಲವೊಮ್ಮೆ ತಿಕ್ಕಾಟ ನಡೆಯುತ್ತಿರುತ್ತದೆ, ಯುದ್ಧ ನಡೆಯಯುವುದಿಲ್ಲ ಎನ್ನುವುದು ಅಲ್ಲಿಯ ನಾಗರೀಕರು ನಂಬಿದ್ದರು.



ಗದ್ಧಾಫಿ

ಇವನು ಸಿರ್ತ್ ನಗರದವನು. ರಾಜಧಾನಿ ತ್ರಿಪೋಲಿಯಲ್ಲಿ ಗದ್ಧಾಫಿ ಕಂಪೌಂಡೆಂದರೆ ನಗರದೊಳಗೊಂದು ನಗರ , ಅಚ್ಚರಿ, ಅದ್ಭುತಗಳಲ್ಲಿ ಒಂದಾಗಿತ್ತು. In that compound there was an under ground secret city. ಅಲ್ಲಿ ಏನು ಸಿಗುತ್ತದೆಂದು ಕೇಳಬೇಡಿ, ಏನು ಸಿಗುವುದಿಲ್ಲವೆಂದು ಕೇಳಿ. ಜಗತ್ತಿನ ಐಶ್ಯಾರಾಮಗಳೆಲ್ಲ ಒಂದೇ ಸೂರಿನಡಿ ಲಭ್ಯವಿತ್ತು.

ಇವನು ಕಾಮುಕ. ವಿಕೃತ ಮನಸಿನವನು. 99% ನಾಗರಿಕರಿಗೆ ಇವನ ಒಂದು ಮುಖ ಮಾತ್ರ ಪರಿಚಿತ. ಇವನ ಅಕ್ಕ ಪಕ್ಕ ಮಹಿಳಾ ಬಾಡಿ ಗಾರ್ಡಗಳು. ಅವರನ್ನು ಸ್ವತಃ ನಿಯುಕ್ತಿ ಮಾಡುತ್ತಿದ್ದ. ಅವರೆಲ್ಲ ಅವನ ಭೋಗದ ವಸ್ತುಗಳು.

ಇವನು ಹಲವು ಸಮಾರಂಭಗಳಿಗೆ ಹೋದರೆ, ಶಾಲಾ-ಕಾಲೇಜು ಕಾರ್ಯಕ್ರಮಗಳಿಗೆ ಹಾಜರಾದಾಗ ಸ್ವಾಗತಿಸಲು ಬಂದ ಯುವತಿಯರು ಇಷ್ಟವಾದಲ್ಲಿ ಆಶಿರ್ವಾದದಂತೆ ಅವರ ತಲೆ ನೇವರಿಸುತ್ತಿದ್ದ. ಇದು ಅವನ ಸಂಕೇತ. ಸಂಕೇತವನ್ನರಿತ ಸಿಬ್ಬಂದಿಗಳು ಮಾರನೆಯದಿನ ಯುವತಿಯನ್ನು ವಿನಾಕಾರಣ ಎನೋ ನೆವ ಹೇಳಿ ಕರೆತರುತ್ತಿದ್ದರು. ( ಹಲವರ ಮಾತಿನಲ್ಲಿ, ಯುದ್ಧ ಪ್ರಾರಂಭವಾದ ನಂತರ ಕೆಲವರು ವಿವರಿಸಿದ್ದರು,  wrote a real life story about this in my book Panchalika   )

ಪ್ರಾರಂಭದ ಹಂತದಲ್ಲಿ ರಾತ್ರಿಯಲ್ಲಿ ಮಾತ್ರ ದಂಗೆ, ಜಗಳ ಕಾಣಿಸಿಕೊಳ್ಳುತ್ತಿತ್ತು. ಯಾವಾಗ    rebels    ಹತ್ತಿರ ಯುದ್ಧದ ಸಾಮಗ್ರಿಗಳು ಸಾಕಷ್ಟು ಶೇಖರಣೆಯಾದವೋ ಆಗ ಹಗಲಿನಲ್ಲಿಯೂ ಪ್ರಾರಂಭವಾಯಿತು.




ಮಾರ್ಚ್ 2011

ಭಾರತೀಯರೆಲ್ಲ ಲಿಬಿಯ ಬಿಟ್ಟು ಹೊರಟಿದ್ದರು...ಆಗಿನ ದೆಹಲಿ ನಗರದ ಜನಸಂಖ್ಯೆಯಷ್ಟು ಭಾರತೀಯರು ಲಿಬಿಯಾದಲ್ಲಿ ನೆಲೆಸಿದ್ದರು. ಭಾರತ ಸರಕಾರ   evacuation   ಗೆ ವ್ಯವಸ್ಥೆ ಮಾಡಿತ್ತು. ಮನಸ್ಸಿಲ್ಲದೆ ಹೊರಟವರು ನಾವೆಲ್ಲ. ನಮಗೆಲ್ಲ ಆಪ್ತವಾಗಿದ್ದ ನಾಡು, ಮರಳಿ ಬರುವ ಇಚ್ಛೆಯಿಂದ ಹೊರಟಿದ್ದೆವು. ಹೊರಡುವುದು ಅನಿವಾರ್ಯವಾಗಿತ್ತು. ಬೆಂಗಾಝಿಯಲ್ಲಿ ಬಾಂಬ್ ಧಾಳಿ ಪ್ರಾರಂಭವಾಗಿತ್ತು.

ನಾವೆಲ್ಲ ಹೊರಟೆವು ಆದರೆ ನಮ್ಮ ಜೊತೆಗಿದ್ದ ಇರಾನ್.,ಇರಾಕ್, ಈಜಿಪ್ಟ ದೇಶದ ಜನರ ಪರಿಸ್ಥಿತಿ ಶೋಚನೀಯ, ತಮ್ಮ ದೇಶದಿಂದ ಪಾಲಾಯನ ಮಾಡಿ ಲಿಬಿಯಾ ಸೇರಿದ್ದರು. ಮುಂದೆ ಏನೆನ್ನುವು ಪ್ರಶ್ನೆ ಬೃಹದಾಕಾರವಾಗಿ ನಿಂತಿತ್ತು.

ಯುದ್ಧ

ಬುಡಕಟ್ಟು ಜಾತಿ ಜನಾಂಗಳ ಮಧ್ಯೆ ತಿಕ್ಕಾಟ ನಡೆಯಿತ್ತಿರುವುದು ಸರ್ವೇಸಾಮಾನ್ಯವಾಗಿತ್ತು. ಲಿಬಿಯಾದ ಸರಕಾರ ದೇಶದ ಅಭಿವೃದ್ಧಿಗಾಗಿ, ಜನಸಾಮಾನ್ಯರ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನವನ್ನು ಮಾಡಿತ್ತು. ಜನರಿಗೆ ಇದರ ಅರಿವೂ ಇತ್ತು.   United Nations     ಹೇರಿದ sanctions  ಗಳನ್ನು ನಿಧಾನವಾಗಿ ಸರಿಪಡಿಸಿ, ದೇಶವನ್ನು ಉತ್ತಮ ಸ್ಥಿಯಲ್ಲಿಟ್ಟಿದ್ದ. ಸರಕಾರದಲ್ಲಿ ಸಮ್ಮಿಲಿತವಾದ ಬುಡಕಟ್ಟು ಜನಾಂಗದವರು ಮಾತ್ರ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ನಿಜವಾದರೂ ಉಳಿದವರು ಸಂತೃಪ್ತರೇ.

ಪ್ರಾರಂಭದಿಂದಲೇ ಉದ್ಭವವಾಗಿದ್ದ ಚಿಂಗಾರಿಗೆ ತುಪ್ಪ ಸುರಿದು ಜ್ವಾಲೆಯಾಗಿ ಮಾರ್ಪಡಲು 42 ( 1969 to 2011) ವರ್ಷಗಳು ಬೇಕಾದವೆ....? ಶಸ್ತಾಸ್ತ್ರಗಳಿಲ್ಲದ ವಿರೋಧಿಗಳಿಗೆ ಆಧುನಿಕ ಶಸ್ತಾಸ್ತ್ರ ಒದಗಿಸಿದವರಾರು.....? ಇದು ಅಲ್ಲಿಯ ಜನಸಾಮಾನ್ಯರಲ್ಲಿ ಎದ್ದ ಪ್ರಶ್ನೆಯಾಗಿತ್ತು. ಸರಕಾರದ ವಿರುದ್ಧ ಹೋರಾಡುವುದು ಸುಲಭವಾಗಿರಲಿಲ್ಲ. ಬಲಿಷ್ಠ ಸರಕಾರವನ್ನು ಉರುಳಿಸಲು ಸಜ್ಜಾದ ವಿರೋಧಿಗಳು ಹಲವಾರು ಸಾರಿ ಹಿಂದೆ ಸರಿದಿದ್ದರು. ಹಲವು ಕುತಂತ್ರದಿಂದ, ಬಲಿಷ್ಠ ರಾಷ್ಟ್ರಗಳ ಸಹಕಾರದಿಂದ ನಡೆದ ಯುದ್ಧ ಗದ್ಧಾಫಿಯ ಪತನಕ್ಕೆ, ಲಿಬಿಯಾದ ಪತನಕ್ಕೆ ಕಾರಣವಾಗಿದ್ದು ನಗ್ನ ಸತ್ಯ.

ಒಂದು ದೇಶವನ್ನು ಕಟ್ಟಿ ಬೆಳೆಸಲು ಶ್ರಮವೆಷ್ಟು ಬೇಕು...
ಜನರನ್ನು ಸಂತೃಪ್ತಗೊಳಿಸಲು ಶ್ರಮವೆಷ್ಟು ಬೇಕು....?
90%  ಜನರು ಸಂತೃಪ್ತರಾಗಿದ್ದರು.

ನಿರಪರಾಧಿ ಜನರು ಬಲಿಯಾಗಿದ್ದರು...

Wednesday 8 October 2014

ನಾನು ನನ್ನ ಕಣ್ಣಾರೆ ನೋಡಿದ್ದು...ಕೇಳಿದ್ದು ಇದು ನನ್ನ ಅನುಭವದ ಕಥನ...A Libya Experience

Heart rending Encounters

ರಾತ್ರಿ ಗಂಟೆ ಹನ್ನೊಂದುವರೆ ಇನ್ನೂ ಆಗಿರಲಿಲ್ಲ. ಮಕ್ಕಳು ಮಲಗಿದ್ದರು. ನಾನು ಅಡುಗೆ ಮನೆಯಲ್ಲಿದ್ದೆ. ಹೊರಗೆ ಗಲಾಟೆ, ಪಟಾಕಿಯ ಸದ್ದು ಕೇಳಿಸಿಕೊಂಡಾಗ.. ಸ್ವಲ್ಪ ನೋಡಿ ಸಂದೀಪ್ ಎಂದೆ, ಯಾರದೋ ಮದುವೆಯ ಸಡಗರ ಜೊತೆಗೆ ಪಟಾಕಿ ಸದ್ದು ಸುಮ್ಮನಿರು ಎಂದರು ನನ್ನ ಪತಿದೇವರು. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ, ಪಟಾಕಿಯ ಸದ್ದಲ್ಲ, ಗುಂಡಿನ ಸದ್ದು, ಹೌದು ನಿರಂತರವಾಗಿ ಗುಂಡಿನ ಸುರಿಮಳೆthe rain of gunfire...        
ಮಕ್ಕಳು ಎದ್ದು ಕುಳಿತರು. ಮನೆಯ ಹೊರಗೆ ಕಿಟಕಿಯಿಂದ ದೃಷ್ಟಿಗೆ ಯಾರೂ ಏನೂ ನಿಲುಕಲಿಲ್ಲ.
ಮಕ್ಕಳನ್ನು ಕಾಲ ಮೇಲೆ ಮಲಗಿಸಿಕೊಂಡು ಕುಳಿತಲ್ಲೆ ರಾತ್ರಿ ಕಳೆದಿದ್ದೆವು. ರಾತ್ರಿ ಪೂರ್ಣ ಗುಂಡಿನ ಘರ್ಜನೆ. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಗುಂಡಿನ ಆರ್ಭಟ ನಿಂತಿತ್ತು.

ಫೋನ್, ಮೆಸೆಜ್, skype calls ಬರಲು ಪ್ರಾರಂಭವಾದವು. ಅಕ್ಕಪಕ್ಕದ ಜನರಿಂದ ಪರಿಚಯಸ್ಥರಿಂದ ಖಚಿತವಾಗಿದ್ದು Libyan revolution ಅಲೆಗಳು Benghazi ಯಿಂದ ಲಿಬಿಯಾದ ರಾಜಧಾನಿ ತ್ರಿಪೋಲಿಯನ್ನು ತಲುಪಿತ್ತು.

ರಾತ್ರಿ ನಡೆದ ಘಟನೆ ಭಯಾನಕ ಯಾರ ಊಹೆಗೆ ನಿಲುಕದ ವಿಷಯವಾಗಿತ್ತು. ರಾತ್ರಿಯಲ್ಲಿ ಸೈನಿಕರ ಸಾಮೂಹಿಕ ಹತ್ಯೆ ನಡೆದಿತ್ತು. ರಸ್ತೆಯಲ್ಲಿ- ಚರಂಡಿಯಲ್ಲಿ ರಕ್ತದ ನದಿ ಹರಿದಿತ್ತು. ಭಯಂಕರ ಚಳಿಯಲ್ಲಿ ನೀರಿನಂತೆ ರಕ್ತ...
ಗದ್ಧಾಫಿಯು ತನ್ನ ಸೈನಿಕರನ್ನು ಸಾಮೂಹಿಕವಾಗಿ ನಿರ್ಭಿಡೆಯಿಂದ ಸಾಯಿಸಿದ್ದ. ಸೈನಿಕರಿಗೆ ಗೋಲಿಬಾರು ನಡೆಸಿ, ಕಂಡವರಿಗೆ ಗುಂಡಿಕ್ಕಿ ಸಾಯಿಸೆಂದು ಆಜ್ನೆಯಿತ್ತಾಗ ತಮ್ಮ ಜನರನ್ನು ಕೊಲ್ಲಲು ಹಿಂಜರಿದ ಸೈನಿಕರು, ಯಾವ ಬೆದರಿಕೆಗೆ ಹೆದರದೆ ಖಡಾಖಂಡಿತವಾಗಿ ತಮ್ಮ ನಿರ್ಧಾರವನ್ನು ಮುಂದಿಟ್ಟ ಸೈನಿಕರ ಸಮೂಹವನ್ನೇ ಧ್ವಂಸಮಾಡಿದ್ದ.

ನನ್ನ ಅನುಭವದ ಹಿನ್ನೆಲೆ
2011-January

ನನ್ನ ಕುಟುಂಬ ಮತ್ತು ನಮ್ಮ ಸ್ನೇಹಿತರೆಲ್ಲ ಸೇರಿ Al-Bayda, Benghazi, Tobruk ಪ್ರವಾಸಕ್ಕೆ ಹೋಗಿದ್ದೆವು.ಇದು ಈಜಿಪ್ಟನ ಮತ್ತು ಲಿಬಿಯಾದ ಗಡಿ ಪ್ರದೇಶ. ತೊಬರುಕ    World War II ನಡೆದ ಸ್ಥಳ.








ಅಲಬೈದಾದಲ್ಲಿ ನಾವು Greek-Ruins ನೋಡುತ್ತಿದ್ದಾಗ ಎಲ್ಲೆಡೆ ಹೆಲಿಕಾಪ್ಟರ್ ತಿರುಗಾಡುತ್ತಿದ್ದವು. ನಾವೆಲ್ಲ ಹೆದರಿದ್ದೆವು. ಈಜಿಪ್ಟನಲ್ಲಿ ಯುದ್ಧ ಆಗಲೇ ಪ್ರಾರಂಭವಾಗಿತ್ತು. ನಮಗೆಲ್ಲ ಸಂಶಯ ಹುಟ್ಟಿದ್ದು ಅಲ್ಲಿಂದ. ಅದೇ ರಾತ್ರಿ ಹೊಟೆಲಿನ ಹೊರಗೆ ಗುಂಡಿನ ಸದ್ದು, ಮನುಷ್ಯ ಚೀರಿದ್ದು ಕೇಳಿಸಿತ್ತು. ಮಾರನೆಯ ದಿನ ಹೊಟೆಲಿನವ ಎರಡು ಜನರು ಗುಂಡೇಟಿಗೆ ಸತ್ತಿದ್ದಾರೆ ಎಂದಿದ್ದ. ಆಗಲೇ rebels ತಯಾರಿ ನಡೆದಿತ್ತು. Benghaziಯಿಂದ ಯುದ್ಧದ ಅಲೆಗಳು ಪ್ರಾರಂಭವಾಗಿದ್ದು. ಸಾಮಾನ್ಯ ಜನರಿಗೆ ಅರಿವಾಗಲಿಲ್ಲ. ಅಲ್ಲಿನ ಸರ್ಕಾರ ಮತ್ತು   rebels  ಗೆ ಮಾತ್ರ ವಿಷಯ ಗೊತ್ತಿತ್ತು.
Pictures of the beautiful Libyan countryside (Al-Bayda) on the Libya-Egypt border: -









ಕಾರಣಗಳು-ಕಾರಣೀಭೂತರು

ಲಿಬಿಯಾದಲ್ಲಿ ಬಡವರು ಇಲ್ಲ. ಇದ್ದರೂ ಊಟ-ತಿಂಡಿಗೆ ಕೊರತೆಯಿರಲಿಲ್ಲ. ಹಸಿವೆಯಿಂದ ಬಳಲುವ ಬಡತನ ಯಾರಿಗೂ ಇರಲಿಲ್ಲ.
ಅಲ್ಲಿ ಡಿಕ್ಟೇಟರಿ ಆಡಳಿತ ಚೀನಾದಂತೆ. ಗದ್ಧಾಫಿ ಸಮಸ್ತ ಅಧಿಕಾರ ಪಡೆಯುವ ಮುನ್ನ ಲಿಬಿಯಾದಲ್ಲಿ ರಾಜನ ಆಡಳಿತವಿತ್ತು. ರಾಜನನ್ನು ಅಧಿಕಾರದಿಂದ ತೆಗೆದು ತನ್ನ ಅಧಿಕಾರ ಸ್ಥಾಪಿಸಿದ್ದ ಗದ್ಧಾಫಿ. (Surprisingly that was a blood less coup)                                 
ರಾಜನ tribe ಬೇರೆ, ಗದ್ಧಾಫಿಯ tribe ಬೇರೆ. ಲಿಬಿಯಾದ ಯುದ್ಧಕ್ಕೆ   tribe  ಮುಖ್ಯವಾದ ಕಾರಣಗಳಲ್ಲಿ ಒಂದು.
Oil 
Libya is one of the major oil producing countries in the world.A few years ago,The Libyan Govt changed their policy to sell a major portion of their oil to European Union instead of US.
ತೈಲಕ್ಕಾಗಿ ಲಿಬಿಯಾದ ಸರಕಾರಕ್ಕೆ ಸಹಕರಿಸುತ್ತಿದ್ದ ಯು ಎಸ್ ನಿಧಾನವಾಗಿ   rebelsಗೆ ತನ್ನ ಸಹಕಾರ ನೀಡಲು ಪ್ರಾರಂಭಿಸಿತ್ತು.

To be continued…


Monday 6 October 2014

ದ್ರೌಪದಿ ಆಗಲಾರೆ...


ಪುನಃ ಪುನಃ ಆ ಎರಡು ಕಣ್ಣುಗಳು ನನ್ನನ್ನು ಕಾಡುತ್ತಿದ್ದವು. ಮನೆಗೆ ಬರಲಿ,ಕೆಲಸಕ್ಕೆ ಹೋಗಲಿ ಆ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿದ್ದವು.ನಿದ್ದೆಯಲ್ಲೂ ಕಾಡುತ್ತಿದ್ದವು.ನಾನು ಬಾನಂಗಳದಿ ಕಣ್ಣು ತೆರೆಯಲು ತಾರೆಗಳ ಮಧ್ಯೆ ನನಗೆ ಕಾಣುತ್ತಿದ್ದವು ಆ ದಯಾನೀಯ ಅಸಾಯಕ ಕಣ್ಣುಗಳು. ತೊಯ್ದಾಡುತ್ತಿದ್ದ ದುಗುಡ ತುಂಬಿದ ನನ್ನ ಮನಸ್ಸು ಛಿದ್ರ ಛಿದ್ರವಾಗಿತ್ತು.ಆ ನೇತ್ರಗಳು ಉಕ್ಕುತ್ತಿರುವ ಕಣ್ಣೀರು ಮನದಾಳದ ಸಂದೇಶವನ್ನು ಸಾರುತ್ತಿದ್ದು,ಇವುಗಳಿಗೆ ಭಾಷೆಗಳ ಅಗತ್ಯವಿಲ್ಲ. ತುಂತುರು ಮಳೆಯು ಭೂಮಿಗೆ ಹಿತನೀಡುವುದು ತಂಗಾಳಿಯು ಮನಕೆ ಮುದನೀಡುವುದು ಬಿರುಗಾಳಿಯು ಎಲ್ಲವನ್ನೂ ಧ್ವಂಸ ಗೊಳಿಸುವುದು. ನನ್ನ ಮನವೂ ಹಾಗೆಯೇ ಆಗಿತ್ತು.
ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಒಬ್ಬಳು ಮುಗ್ಧೆ ತನ್ನ ಚಿಕ್ಕ ಮಗುವಿನ ಜೊತೆ ಶೌಚಾಲಯದ ಬಳಿ ಕುಳಿತಿದ್ದಳು. ಎರಡು ಬಾರಿ ಅಡ್ಡಾಡಿ ಬಂದೆ. ಅವಳು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಳು. ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆಯುವುದಾ? ಇನ್ನೊಂದೆಡೆ ನೀನೂ ಹೆಣ್ಣಲ್ಲವೆ? ತಾಯಿಯಲ್ಲವೆ?ಅಂತರಾತ್ಮ ಚೀರುತ್ತಿತ್ತು. ಕೇಳಿಯೇ ಬಿಟ್ಟೆ,”ಬೆಹೆನ್ ಕಹಾಂ ಜಾ ರಹಿ ಹೋ?” ಅಶೃವನ್ನು ಧಾರಾಕಾರವಾಗಿ ಸುರಿಸಿದಳು. ನಾನೂ ಅವಳಲ್ಲಿ ಐಕ್ಯವಾಗುತ್ತಿದ್ದೆ. ನನ್ನ ಸ್ಪರ್ಷ ಅವಳಿಗೆ ಸಾಂತ್ವನ ನೀಡುತ್ತಿತ್ತು,”ದೀದೀ ಮೇರೀ ಕಹಾನೀ ಸುನೋ….”ಅವಳ ಕಣ್ಣುಗಳನ್ನು ನೋಡುತ್ತಿದ್ದಂತೆ ನನ್ನ ಕರುಳು ಕಿತ್ತು ಬಂದಂತಾಗಿತ್ತು.


ಬಡತನದಲ್ಲಿ ಬೆಳೆದ ನಾನು ಕನಸುಗಳ ರಾಜಕುಮಾರಿ.ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿತ್ತು.ದೂರದೂರಿನಲ್ಲಿ ಕನಸು ನನಸಾಗಿಸಲು ಹೊರಟಿದ್ದೆ.ರೈಲು ಬಸ್ಸು ಬದಲಿಸುತ್ತ, ಅವನ ಜೊತೆ ಅವನ ಸ್ಪರ್ಷ ನನಗೆ ಮುದನೀಡಿತ್ತು. ಬಾನಲ್ಲಿ ಯಾವ ಪರಿವೆ ಇಲ್ಲದೆ ಹಾರಾಡುತ್ತಿದ್ದೆ. ಐದು ಗಂಡು ಮಕ್ಕಳು,ತಾಯಿ ಚಿಕ್ಕದಾದ ಒಂದು ಮನೆ.ಹೊರಾಂಗಳ,ಅಡುಗೆಮನೆಯಲ್ಲಿಯೇ ಅವನು ನನಗೆ ಸ್ವರ್ಗ ದರ್ಶನ ಮಾಡಿಸಿದ. ಅದು ನನ್ನ ಅರಮನೆಯಾಗಿತ್ತು.
ಮುಸ್ಸಂಜೆಯಲ್ಲಿ ನನ್ನ ಇನಿಯನ ದಾರಿ ಕಾಯುತ್ತ ಹಾಡು ಕೇಳುತ್ತಿದೆ
ಇಕ್ ಪ್ಯಾರ ಕಾ ನಗಮಾ ಹೆ ಮೌಜೊಂಕೀ ರವಾನೀ ಹೆ
ಜ಼ಿಂದಗೀ ಒರ್ ಕುಛ್ಃ ಭೀ ನಹೀ ತೇರೀ ಮೇರೀ ಕಹಾನೀ ಹೆ…………….”
ಗಾಳಿಗೆ ಒದ್ದಾಡುತ್ತಿರುವ ದೀಪ,ಜೋರಾದ ಮಳೆ,ಗುಡುಗು,ಸಿಡಿಲು ಕಿಟಕಿಯ ಬಾಗಿಲುಗಳನ್ನು ಮುಚ್ಚಿದೆ.ಅತ್ತೆ ದೂರದ ಸಂಬಂಧಿಕರ ಮನೆಗೆ ಹೋಗಿದ್ದರು. ನನ್ನ ಗಂಡನ ತಮ್ಮಂದಿರೆಲ್ಲ ಮನೆ ಸೇರಿದರು. ನನ್ನವರಿಗಾಗಿ ಕಾಯುತ್ತಿದ್ದೆ. ಕಂದೀಲು ದೀಪ ಮಂದವಾಗಿತ್ತು. ನನ್ನವರು ಬಂದರು, ಎಲ್ಲರಿಗೂ ಊಟವಿಕ್ಕಿದೆ. ಗಾಳಿ ಮಳೆ ಅಂಧಕಾರದ ಮಧ್ಯೆ ಗುಡುಗು ಸಿಡಿಲುಗಳ ಅಬ್ಬರ. ಈ ಅಂಧಕಾರ ಸಿಡಿಲುಗಳು ನನ್ನ ಜೀವನದಲ್ಲೂ ಬಿರುಗಾಳಿಯನ್ನು ತರುವವೆಂದು ತಿಳಿದಿರಲಿಲ್ಲ.ಚುಮು ಚುಮು ಮುಂಜಾವು ಕಣ್ಣು ಬಿಟ್ಟೆ,ತುಂತುರು ಮಳೆಯಿತ್ತು,ಎರಡು ಬಾರಿ ಕಣ್ಣನ್ನು ಉಜ್ಜಿಕೊಂಡೆ ನಿದ್ದೆಯ ಮಂಪುರು ಮತ್ತೆ- ಅಲ್ಲ ಸತ್ಯ.ನನ್ನ ಪಕ್ಕದಲ್ಲಿ ನನ್ನ ಮೈದುನ? ನನ್ನವರಿಗೆ ಮುಖ ತೋರಿಸಬಾರದು,ಆತ್ಮ ಹತ್ಯೆಯೇ ಗತಿ ಎನಿಸಿ ಹೊರಬರುತಿರಲು ನನ್ನ ಗಂಡನ ಧ್ವನಿ ಬಂದಿತು,ಇನ್ನು ನೀನು ನಮಗೆಲ್ಲ ದ್ರೌಪದಿ.
ಕರ್ಮಣ್ಯೇ ವಾಧಿಕಾರಸ್ಯೇ ಮಾ ಫಲೆಷು ಕದಾಚನ……….
ಯಾಕೆ ನಾನು ಕರ್ಮವನ್ನು ಮಾಡಲಿಲ್ಲವೇ? ನನ್ನ ಕರ್ಮಕ್ಕೆ ಈ ಪ್ರತ್ಯುತ್ತರವೆ? ಭೂಮಿಯು ಯಾಕೆ ಬಾಯ್ತೆರೆಯಲಾರದು,ವೈದೇಹಿಯಂತೆ ನನ್ನನ್ನು ಸ್ವೀಕರಿಸಲಾರದು.ನನ್ನ ಮನದಳಲನ್ನು ಯಾರಿಗೆ ಹೇಳಲಿ? ಹಗಲು ರಾತ್ರಿಯ ಭೇದವರಿಯದೆ ಪ್ರಾಣಿಯಂತಾಯಿತು ನನ್ನ ಜೀವನ.ನಾನು ಅತ್ತೆಯವರಿಗೆ ಕಾಯ್ದೆ.ಆರು ತಿಂಗಳ ನಂತರ ಮನೆಗೆ ಬಂದರು.ಅವರು ಗಾಂಧಾರಿ. ಮನಸಿನ ಅಳನನ್ನು ಸಾರಿ ಸಾರಿ ಹೇಳಿಕೊಂಡೆ.ಇವರು ಹೆಣ್ಣಲ್ಲ ಕಲ್ಲು ಬಂಡೆ ಅನಿಸಿತ್ತು.ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ? ಆದರೆ ನಾನು ಯಾರಿಗೆ ಮುದ್ದು? ನಾನು ತರಕಾರಿ ಹಣ್ಣುಗಳ ಹಾಗಾಗಿಬಿಟ್ಟೆ. ಒಳ್ಳೆಯ ಬೆಲೆಗೆ ಮಾರಾಟ ನಂತರ ಹಂಚಿಕೊಂಡು ತಿನ್ನುವ ಸಾಮಗ್ರಿ.ಈ ಕಂದನೂ ಮಡಿಲಿಗೆ ಬಂದ.ಮಗು ಹುಟ್ಟಿದ ಮಾರನೆಯ ದಿನವೇ ಹೇಗೋ ಮಾಡಿ ಓಡಿ ಬಂದೆ.ನಾನು ದ್ರೌಪದಿಯಾಗಲು ಸಾಧ್ಯವೆ? ಅವಳಿಗೆ ಅರ್ಜುನನಿದ್ದ,ಅವಳು ಕರೆದರೆ ಕಾಪಾಡಲು ಕೃಷ್ಣನಿದ್ದ,ನನಗ್ಯಾರು? ನನಗೆ ನಾನು,ಗೋಡೆಗೆ ಮಣ್ಣು.ಏನೋ ಜೀವನದ ಬಗ್ಗೆ ಜಿಗುಪ್ಸೆ.ಸಾಯಲು ಕಷ್ಟ ಬದುಕುವುದಂತೂ ಇನ್ನೂ ಕಷ್ಟವಾಗಿತ್ತು. ಅವಳಿಗೆ ಸಮಾಧಾನ ಮಾಡಿ ನನ್ನ ಜಾಗದಲ್ಲಿ ಮಲಗು ಎಂದೆ.
ರಾತ್ರಿಯಎರಡು ಗಂಟೆ. ಜಗತ್ತು ನಿದ್ರಿಸುತ್ತಿತ್ತು. ನಾನು ಇಳಿಯುವಸ್ಥಳಬಂತು. ನಮ್ಮವರ ಜೊತೆ ಇಳಿದು ಹೊರಟು ಬಿಟ್ಟೆ.ಯಾವಾಗ ಕಾರಲ್ಲಿ ಕುಳಿತೆನೋ ಭೂಕಂಪವಾದಂತೆನಿಸಿತ್ತು. ಬಲು ವೇಗದಲ್ಲಿ ತಿರುಗಿ ಓಡಿ ಬಂದೆ. ಎಲ್ಲವೂ ಸ್ತಬ್ಧ. ದೀರ್ಘ ಮೌನ. ರೈಲು ತನ್ನ ವೇಗವನ್ನು ಹಿಡಿದಿತ್ತು,ರೈಲಿನ ಘರ್ಷಣೆಯಲ್ಲಿ ಅವಳ ವೇದನೆಯೂ ಐಕ್ಯವಾಗಿತ್ತು.ಅವಳು ನಿಮಗೂ ಸಿಗಬಹುದು.ತನ್ನ ಅಂತರಾಳವನ್ನು ಹೇಳಿಕೊಳ್ಳಲು ಹಾತೊರೆಯುವಳು,ಅವಳ ನೇತ್ರಗಳಿಂದ ನಿಮಗೂ ಕಥೆಯನ್ನು ಸಾರಬಲ್ಲಳು.
ಅವಳನ್ನು ನೀವು ಕಂಡಿರಾ…….? ಅವಳನ್ನು ನೀವು ಕಂಡಿರಾ……?
(ಸತ್ಯ ಘಟನೆಯ ಆಧಾರಿತ ಕಥೆ)
(  23 feb 2014 ಖುಷಿ ಕನ್ನಡ ಪ್ರಭದಲ್ಲಿ ಪ್ರಕಟವಾದ ಕಥೆ)

-